ಬೃಂದಾವನ

ತನು ಮನ ಸೆಳೆಯುವ
ಬೃಂದಾವನಕೆ ಹೋಗುವ ಬಾರೆ ಸಖಿ
ಕರೆಯೋಲೆಯನಿತ್ತು ಕರೆಯುತಿದೆ
ಬೃಂದಾವನ ||

ನವರಸ ಶೃಂಗಾರ ರಸದೌತಣ
ನವ ಚೈತನ್ಯ ಮೈತಾಳಿತ್ತು
ರಾಧೆ ಕೃಷ್ಣೆಯರ ಗೋಪಿಕೆಯರ
ವನ ಬೃಂದಾವನ ||

ಕಿನ್ನರ ಲೋಕದ ಕಿನ್ನರಿಯ ನರ್‍ತನ
ಜಲದಿನಿಂದು ಮೆರೆವ ಸ್ವರ್‍ಗ
ಮಧುಸೂದನನ ವನ ಬಿನ್ನಾಣ
ಇಳೆಯ ಗೀತಗಾನ ಬೃಂದಾವನ ||

ಪುಷ್ಪಕ ವಿಮಾನ ರಾಜಹಂಸ ತೂಗಿ
ಆಡಿಸಿತ್ತು ಜೋಗುಳ ಬೆಳ್ಳಿಯ
ಕಿರೀಟವ ಧರಿಸಿ ಝೆಂಕಾರದಲಿ
ಜಲದಿ ರಾಜ ನಿಂದು ಹರಿಸಿದವನ ಬೃಂದಾವನ ||

ಕೊಳಲ ಗಾನದಲಿ ನಾಟ್ಯವಾಡುವ ಅಪ್ಸರೆ
ಬಳಕುತ ಬಳ್ಳಿಲತೆಗಳಂತೆ ರಮಣಿಯ
ರಾಗ ಭಂಗಿಯಲಿ ಸೋಪಾನ
ಕೆಳೆವಿತ್ತು ಕರೆಯಿತು ಬೃಂದಾವನ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಿಯ ಪ್ರತಿಮೆಗಳೇ ಪ್ರೀತಿ ಕಲಿಸಿ
Next post ಪಕ್ಷಾಂತರ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys